ಗಡಿಯಲ್ಲಿ ಭಾರತ 17 ದಿನಗಳ ಬೃಹತ್ ಸಮರಾಭ್ಯಾಸ; ಪಾಕಿಸ್ತಾನದಲ್ಲಿ ಆತಂಕ?

Share this… Facebook Whatsapp Telegram Pinterest Twitter Linkedinನವದೆಹಲಿ: ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ 17 ದಿನಗಳ ಬೃಹತ್ ಸಮರಾಭ್ಯಾಸ ನಡೆಸಲು ಸಜ್ಜಾಗಿದೆ. ಈ ಸಂಬಂಧ ಅಧಿಕೃತ NOTAM ಕೂಡ ಜಾರಿಯಾಗಿದೆ. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಸಮರಾಭ್ಯಾಸಕ್ಕಾಗಿ ಜೈಸಲ್ಮೇರ್, ಬಾರ್ಮರ್, ಫಲೋದಿ, ಜೋಧ್‌ಪುರ ಹಾಗೂ ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯಲ್ಲಿ ಕೆಲವು ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ಮೀಸಲಿಡಲಾಗಿದೆ. ಈ ಅವಧಿಯಲ್ಲಿ ನಾಗರಿಕ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ. ಈ ಪ್ರದೇಶದಲ್ಲಿ…

Read More

ಗಾಂಜಾ ಸೇವನೆ ಪಾಸಿಟಿವ್; ಫುಕೆಟ್-ದೆಹಲಿ ವಿಮಾನದ ಪೈಲಟ್ ವಜಾ

Share this… Facebook Whatsapp Telegram Pinterest Twitter Linkedinಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ ಮಾದಕ ವಸ್ತು ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ಬಸ್ A320 ವಿಮಾನ ಹಾರಾಟದ ವೇಳೆ ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು. ವಿಮಾನದಲ್ಲಿದ್ದ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಪೈಕಿ ಹಲವರಿಗೆ ಗಾಯಗಳಾಗಿದ್ದವು. ವಿಮಾನವನ್ನು…

Read More

ಗೃಹಲಕ್ಷ್ಮಿ 33ನೇ ಕಂತು: ಹಣ ಬರುವ ಮುನ್ನ ಈ ಕೆಲಸ ತಪ್ಪದೆ ಮಾಡಿ

Share this… Facebook Whatsapp Telegram Pinterest Twitter Linkedinಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣಕ್ಕಾಗಿ ಮಹಿಳಾ ಫಲಾನುಭವಿಗಳು ಕಾಯುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಬಾಕಿ ಇರುವ ಕಂತಿನ ಹಣ ಜಮೆಯಾಗುವ ಸಾಧ್ಯತೆ ಬಗ್ಗೆ ವರದಿಗಳು ಬರುತ್ತಿವೆ. ಆದರೆ ಈ ನಡುವೆ ಸರ್ಕಾರ ಫಲಾನುಭವಿಗಳ ದಾಖಲೆ ಹಾಗೂ ಅರ್ಹತೆಯನ್ನು ಪರಿಶೀಲಿಸುತ್ತಿರುವುದರಿಂದ ಕೆಲವು ಪ್ರಮುಖ ವಿವರಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ. ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ₹2,000 ಆರ್ಥಿಕ…

Read More

ಕಾಕ್ರೋಚ್ ಜನತಾ ಪಾರ್ಟಿ ಇಬ್ಭಾಗ; ಹೊಸದಾಗಿ CJP-D ಘೋಷಣೆ!

Share this… Facebook Whatsapp Telegram Pinterest Twitter Linkedinದೆಹಲಿ: ಯುವಕರು ಹಾಗೂ ವಿದ್ಯಾರ್ಥಿಗಳ ಹೋರಾಟದಿಂದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಇಬ್ಭಾಗವಾಗಿದೆ. ಪಕ್ಷದ ಪ್ರಮುಖ ಕಾರ್ಯಕರ್ತ ಮನೀಶ್ ಬ್ರಹ್ಮಭಟ್ ಅವರು ಗುರುವಾರ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (CJP-D) ಎಂಬ ಹೊಸ ಬಣವನ್ನು ಘೋಷಿಸಿದ್ದಾರೆ. ಮೂಲ ಪಕ್ಷದ ನಾಯಕ ಅಭಿಜಿತ್ ದೀಪ್ಕೆ ಅವರು ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ (AAP) ಜೊತೆ ಕೈಜೋಡಿಸಿದ್ದಾರೆ ಎಂದು ಮನೀಶ್ ಬ್ರಹ್ಮಭಟ್ ಆರೋಪಿಸಿದ್ದಾರೆ….

Read More

125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ? ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶ

Share this… Facebook Whatsapp Telegram Pinterest Twitter Linkedinಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯವೊಂದರ ಭಾಗ ಕುಸಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನರೋವಾಲ್ ಜಿಲ್ಲೆಯಲ್ಲಿರುವ ದೇವಾಲಯವನ್ನು ರಕ್ಷಿಸುವಲ್ಲಿ ಪಾಕಿಸ್ತಾನದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತ ಆಗ್ರಹಿಸಿದೆ. ಅಲ್ಲದೆ, ಹಾನಿಗೊಳಗಾದ ದೇವಾಲಯವನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ…

Read More

ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ

Share this… Facebook Whatsapp Telegram Pinterest Twitter Linkedinಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ರದ್ದುಗೊಳಿಸಿದೆ. ಸಿಜೆಪಿ ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿತ್ತು. ಈ ಬಗ್ಗೆ ಪಕ್ಷದ ವಕ್ತಾರ ಸೌರವ್ ದಾಸ್ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ಸರ್ಕಾರದ ಭರವಸೆ…

Read More

ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಸಿಗೋದು ಎಲ್ಲಿ ಗೊತ್ತಾ?

Share this… Facebook Whatsapp Telegram Pinterest Twitter Linkedinಭಾರತೀಯರಿಗೆ ಚಿನ್ನ ಅಂದ್ರೆ ಬರೀ ಆಭರಣವಲ್ಲ. ಅದು ಸಂಪ್ರದಾಯ, ನಂಬಿಕೆ, ಸಂಪತ್ತು ಮತ್ತು ಹೂಡಿಕೆಯ ಒಂದು ಭಾಗ. ಹಬ್ಬ, ಮದುವೆ ಅಥವಾ ಅಕ್ಷಯ ತೃತೀಯದಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಶುಭ ಎಂಬ ನಂಬಿಕೆಯೂ ಇದೆ. ಹೀಗಾಗಿ ಚಿನ್ನದ ಬೆಲೆ ಏರಿಳಿತದ ಮೇಲೆ ಜನರ ಕಣ್ಣು ಯಾವಾಗಲೂ ಇರುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಬಹುತೇಕ ಒಂದೇ ರೀತಿ ಕಂಡರೂ, ಕೆಲವು ಕಡೆ ಒಟ್ಟಾರೆ ಖರೀದಿ…

Read More

ಬೆಲ್ಲ, ಸಕ್ಕರೆ ಬೆನ್ನಲ್ಲೇ ಗಗನಕ್ಕೇರಿದ ಮೊಟ್ಟೆ ಬೆಲೆ

Share this… Facebook Whatsapp Telegram Pinterest Twitter Linkedinಮೊಟ್ಟೆ ತಿನ್ನುವವರಿಗೆ ಇದೀಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಸಕ್ಕರೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ, ಮುಂದಿನ ದಿನಗಳಲ್ಲಿ ಮೊಟ್ಟೆಯ ದರವೂ ಹೆಚ್ಚಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಮೊಟ್ಟೆಯ ಬೆಲೆ ಸುಮಾರು 35ರಿಂದ 40% ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (NECC) ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು…

Read More

ನಿಮ್ಮ ಬಳಿ 5 ರೂ. ಹಳೆಯ ನೋಟು ಇದ್ರೆ ಸಿಗುತ್ತೆ ಲಕ್ಷಾಂತರ ರೂಪಾಯಿ

Share this… Facebook Whatsapp Telegram Pinterest Twitter Linkedinನಿಮ್ಮ ಬಳಿ ಹಳೆಯ 5 ರೂಪಾಯಿ ನೋಟು ಇದೆಯಾ? ಅದರಲ್ಲೂ ಟ್ರ್ಯಾಕ್ಟರ್ ಚಿತ್ರ ಇರುವ ನೋಟು ಇದ್ದರೆ, ಅದಕ್ಕೆ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವವರಲ್ಲಿ ಇಂತಹ ಅಪರೂಪದ ಕರೆನ್ಸಿಗೆ ಬೇಡಿಕೆ ಇರುವುದರಿಂದ ಈ ರೀತಿಯ ಸುದ್ದಿಗಳು ಆಗಾಗ್ಗೆ ವೈರಲ್ ಆಗುತ್ತವೆ. ಟ್ರ್ಯಾಕ್ಟರ್ ಇರುವ 5 ರೂ. ನೋಟು ಏಕೆ ಫೇಮಸ್? ಟ್ರ್ಯಾಕ್ಟರ್ ಚಿತ್ರವಿರುವ ಹಳೆಯ…

Read More

‘ಇಂದು ಸಿಎಂ – ನಾಳೆ ಪ್ರಧಾನಿ’;ತಮಿಳುನಾಡಿನಲ್ಲಿ ವೈರಲ್ ಆಯ್ತು ಹೊಸ ಪೋಸ್ಟರ್!

Share this… Facebook Whatsapp Telegram Pinterest Twitter Linkedinಚೆನ್ನೈ: ತಮಿಳುನಾಡಿನ ತೂತುಕುಡಿ ನಗರದಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಅವರನ್ನು ‘ನಾಳಿನ ಪ್ರಧಾನಿ’ ಎಂದು ಬಿಂಬಿಸಿರುವ ಪೋಸ್ಟರ್‌ಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ. ಟಿವಿಕೆ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಸುಧಾಕರ್‌ ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಪೋಸ್ಟರ್‌ಗಳಲ್ಲಿ ವಿಜಯ್ ಅವರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸಲಾಗಿದ್ದು, ಇದರ ಬೆನ್ನಲ್ಲೇ ವಿಜಯ್ ಅವರ ರಾಷ್ಟ್ರೀಯ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ….

Read More