Skip to content

NammaSuddi.com

NammaSuddi.com

  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
  • Home
  • Latest
  • ಕ್ರೀಡೆ
  • ಜೀವನಶೈಲಿ
  • ರಾಜಕೀಯ
  • ದೇಶ
  • ಕರ್ನಾಟಕ
  • ಬೆಂಗಳೂರು
  • ಸಿನಿಮಾ
  • ತಂತ್ರಜ್ಞಾನ
  • ವ್ಯಾಪಾರ
Close

Search

Latestದೇಶವೈರಲ್

ಕೋರಿಯನ್‌ ಹಾರ್ಟ್‌ ತೋರಿಸಿ Gen-Zಗಳ ಗಮನ ಸೆಳೆದ ರಾಹುಲ್‌ ಗಾಂಧಿ

By Nammasuddi.com
August 2, 2026 1 Min Read
0
Updated on August 3, 2026

ನವದೆಹಲಿ: ಸ್ನೇಹ ದಿನದ ಪ್ರಯುಕ್ತ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಒಂದು ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರಿಯನ್ ಫಿಂಗರ್ ಹಾರ್ಟ್ ತೋರಿಸಿ ಯುವಕರಿಗೆ ಶುಭಾಶಯ ತಿಳಿಸಿದ ರಾಹುಲ್ ಗಾಂಧಿ, ವಿಶೇಷವಾಗಿ Gen-Z ಯುವಕರ ಗಮನ ಸೆಳೆದಿದ್ದಾರೆ.

ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊರಿಯನ್ ಫಿಂಗರ್ ಹಾರ್ಟ್ ತೋರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಾನು ಇನ್ನೂ ವಿದ್ಯಾರ್ಥಿ. ಪ್ರತಿದಿನ ಹೊಸದನ್ನು ಕಲಿಯುತ್ತಿದ್ದೇನೆ. ಇಂದಿನ ಪಾಠ… ಇದು ಫ್ರೆಂಡ್‌ಶಿಪ್ ಡೇ, ಇದು ಹಾರ್ಟ್’ ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್‌ನ ಕೊನೆಯಲ್ಲಿ, ‘ಎಲ್ಲರಿಗೂ ಸ್ನೇಹ ದಿನದ ಶುಭಾಶಯಗಳು… ತುಂಬು ಪ್ರೀತಿಯಿಂದ’ ಎಂದು ಹೇಳಿ ಶುಭಾಶಯ ತಿಳಿಸಿದ್ದಾರೆ. ಈ ಪೋಸ್ಟ್ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್‌ ಪಾಂಡ್ಯ? ಗೆಳತಿ ಜೊತೆ ತಿಮ್ಮಪ್ಪನಿಗೆ ವಿಶೇಷ ಪೂಜೆ

ಕೊರಿಯನ್ ಫಿಂಗರ್ ಹಾರ್ಟ್ ಎನ್ನುವುದು ಹೆಬ್ಬೆರಳು ಮತ್ತು ತೋರು ಬೆರಳನ್ನು ಸೇರಿಸಿ ತೋರಿಸುವ ಸಣ್ಣ ಹೃದಯದ ಸಂಕೇತವಾಗಿದೆ. ದಕ್ಷಿಣ ಕೊರಿಯಾದ ಕೆ-ಪಾಪ್ ಸಂಸ್ಕೃತಿಯಿಂದ ಇದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಪ್ರೀತಿ, ಸ್ನೇಹ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಈ ಸನ್ನೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸ್ನೇಹ ದಿನದಂದು ಇದೇ ಸಂಕೇತದ ಮೂಲಕ ಶುಭಾಶಯ ತಿಳಿಸಿರುವ ರಾಹುಲ್ ಗಾಂಧಿ ಅವರ ಪೋಸ್ಟ್ ಈಗ ಯುವಜನರಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ವಿಶೇಷವಾಗಿ Gen-Z ಬಳಕೆದಾರರು ಈ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಡಿಮೆಯಾಗುತ್ತಾ ಚಿನ್ನದ ಬೆಲೆ? ಬಂಗಾರದ ಸಂಗ್ರಹ ಹೆಚ್ಚಿಸಿದ ಆರ್‌ಬಿಐ..!

Tags:

CongressFriendship DayGen ZNational NewsRahul Gandhi
Author

Nammasuddi.com

Follow Me
Other Articles
Previous

ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್‌ ಪಾಂಡ್ಯ? ಗೆಳತಿ ಜೊತೆ ತಿಮ್ಮಪ್ಪನಿಗೆ ವಿಶೇಷ ಪೂಜೆ

Next

ವೈಟ್‌ ರೈಸ್‌ ತಿಂದರೆ ನಿಜವಾಗ್ಲೂ ದಪ್ಪ ಆಗ್ತಾರಾ? ಬೊಜ್ಜು ಕರಗಿಸೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ
  • ‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್
  • ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ
  • ವಿದ್ಯಾರ್ಥಿಗಳ ವಿರುದ್ಧ FIR ಇಲ್ಲ; ಪ್ರತಿಭಟನೆಗೆ ಬೆಂಬಲಿಸಿದವರಿಗೆ ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರದ ಸ್ಪಷ್ಟನೆ
  • ಡಿಕೆ ಸಂಪುಟ ವಿಸ್ತರಣೆ: 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

Recent Comments

No comments to show.