Appleನ Foldable iPhone Duo ಬಿಡುಗಡೆ; ಭಾರತದಲ್ಲಿ ಬೆಲೆ ₹2.99 ಲಕ್ಷ!

Share this… Facebook Whatsapp Telegram Pinterest Twitter Linkedinಕ್ಯಾಲಿಫೋರ್ನಿಯಾ: iPhone ಪ್ರಿಯರಿಗೆ Apple ಕಡೆಯಿಂದ ಬಿಗ್ ಅಪ್‌ಡೇಟ್ ಬಂದಿದೆ. ಬಹುನಿರೀಕ್ಷಿತ Foldable iPhone Duo ಅನ್ನು ಕಂಪನಿ ತನ್ನ ವಾರ್ಷಿಕ ಈವೆಂಟ್‌ನಲ್ಲಿ ಅನಾವರಣಗೊಳಿಸಿದೆ. ಪ್ರೀಮಿಯಂ ಡಿಸೈನ್, ದೊಡ್ಡ ಸ್ಕ್ರೀನ್ ಮತ್ತು ಹೊಸ AI ಫೀಚರ್ಸ್‌ಗಳೊಂದಿಗೆ ಈ ಫೋನ್ ಗಮನ ಸೆಳೆಯುತ್ತಿದೆ. ಫೋನ್ ಮುಚ್ಚಿದಾಗ 5.4 ಇಂಚಿನ ಹೊರಪರದೆ ಸಿಗುತ್ತದೆ. ಅದನ್ನು ಓಪನ್ ಮಾಡಿದರೆ ಬರೋಬ್ಬರಿ 7.6 ಇಂಚಿನ ಒಳಪರದೆ ಆಗಿ ಬದಲಾಗುತ್ತದೆ. ಅಂದರೆ ಸಾಮಾನ್ಯ ಫೋನ್…

Read More

50 ಸಾವಿರ ಖರ್ಚು ಮಾಡಿ ಈ ಬೆಳೆ ಬೆಳೆದ್ರೆ ಸಿಗುತ್ತೆ 2 ಲಕ್ಷ ಲಾಭ; ನಷ್ಟವಾಗೋ ಮಾತೆ ಇಲ್ಲ

Share this… Facebook Whatsapp Telegram Pinterest Twitter Linkedinಕೃಷಿಯಲ್ಲಿ ಹೆಚ್ಚು ಲಾಭ ಪಡೆಯಬೇಕು ಅನ್ನೋ ರೈತರು ಈಗ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ವಾಣಿಜ್ಯ ಬೆಳೆಗಳತ್ತಲೂ ಗಮನ ಕೊಡುತ್ತಿದ್ದಾರೆ. ಕಡಿಮೆ ನೀರು ಮತ್ತು ಕಡಿಮೆ ನಿರ್ವಹಣೆಯಲ್ಲಿ ಬೆಳೆಯಬಹುದಾದ ಅಲೋವೆರಾ ಕೃಷಿ ಕೂಡ ಉತ್ತಮ ಆಯ್ಕೆಯಾಗಿ ಕಾಣಿಸುತ್ತಿದೆ. ಅಲೋವೆರಾವನ್ನು ಒಮ್ಮೆ ನಾಟಿ ಮಾಡಿದರೆ ಸುಮಾರು 3ರಿಂದ 5 ವರ್ಷಗಳವರೆಗೆ ಇಳುವರಿ ಪಡೆಯಬಹುದು ಎನ್ನಲಾಗುತ್ತದೆ. ಕಾಸ್ಮೆಟಿಕ್ಸ್, ಆಯುರ್ವೇದ ಮತ್ತು ಕೆಲವು ಔಷಧ ಉತ್ಪನ್ನಗಳಲ್ಲಿ ಅಲೋವೆರಾ ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ….

Read More

22 ತಿಂಗಳಲ್ಲಿ 20 ಟನ್ ಚಿನ್ನ ಖರೀದಿಸಿದ ಚೀನಾ..! ಹಿಂದಿದೆ ಈ ಅಚ್ಚರಿಯ ರಹಸ್ಯ

Share this… Facebook Whatsapp Telegram Pinterest Twitter Linkedinಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾನ್ಯವಾಗಿ ಬೆಲೆ ಜಾಸ್ತಿಯಾದಾಗ ಖರೀದಿ ಕಡಿಮೆಯಾಗುತ್ತದೆ. ಆದರೆ ಚೀನಾದ ಕಥೆಯೇ ಬೇರೆ. ಬೆಲೆ ಏರಿಕೆಯ ನಡುವೆಯೂ ಚೀನಾ ಸತತವಾಗಿ ಚಿನ್ನ ಖರೀದಿಸುತ್ತಿದೆ. ಕಳೆದ 22 ತಿಂಗಳಿಂದ ಚೀನಾ ತನ್ನ ಚಿನ್ನದ ಮೀಸಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ತಿಂಗಳು ಮಾತ್ರ ಸುಮಾರು 20 ಟನ್ ಚಿನ್ನ ಖರೀದಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಚೀನಾದ ಅಧಿಕೃತ ಚಿನ್ನದ ಮೀಸಲು ಸುಮಾರು 76.7 ಮಿಲಿಯನ್…

Read More

ಕಲ್ಲಂಗಡಿ ಹಣ್ಣಲ್ಲ, ಅದರ ಬೀಜಗಳಿಂದ ಇದೆ ಆರೋಗ್ಯಕ್ಕೆ ಅಚ್ಚರಿಯ ಲಾಭ

Share this… Facebook Whatsapp Telegram Pinterest Twitter Linkedinಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಹಣ್ಣು ತಿನ್ನುವಾಗ ಅದರ ಬೀಜಗಳನ್ನು ತೆಗೆದು ಎಸೆಯುವುದು ಸಾಮಾನ್ಯ. ಆದರೆ ಇದೇ ಬೀಜಗಳಲ್ಲಿ ಹಲವು ಪೋಷಕಾಂಶಗಳಿವೆ ಎನ್ನಲಾಗುತ್ತದೆ. ಕಬ್ಬಿಣ, ಮೆಗ್ನೀಸಿಯಮ್, ಸತು, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಇದರಲ್ಲಿ ಇರುತ್ತವೆ. ಕಲ್ಲಂಗಡಿ ಬೀಜದಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ಮೆಗ್ನೀಸಿಯಮ್ ಹೃದಯದ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಹುದು ಎನ್ನಲಾಗುತ್ತದೆ. ಇದರಲ್ಲಿರುವ…

Read More

TVK ಮೈತ್ರಿ ಕೂಟಕ್ಕೆ ಹೊಸ ಹೆಸರು; ವಿಜಯ್‌ ಹೊಸ ಆಟ ಶುರು

Share this… Facebook Whatsapp Telegram Pinterest Twitter Linkedinಚೆನ್ನೈ: ನಟ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿದೆ. ಇದೀಗ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಸೇರಿರುವ ಮೈತ್ರಿಗೆ ಹೊಸ ಹೆಸರು ಫೈನಲ್‌ ಆಗಿದೆ. ಈ ಮೈತ್ರಿಗೆ ‘ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿ’ (SSJVA) ಎಂದು ಅಧಿಕೃತವಾಗಿ ಹೆಸರಿಡಲಾಗಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ…

Read More

ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ED ದಾಳಿ; ಡಿಕೆಶಿ ಹೇಳಿದ್ದೇನು?

Share this… Facebook Whatsapp Telegram Pinterest Twitter Linkedinಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆದಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದಾಳಿ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಈ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷವನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು EDಯನ್ನು ಬಳಸಿಕೊಳ್ಳಲಾಗುತ್ತಿದೆ…

Read More

Cheek Dimples: ಕೆನ್ನೆಯ ಮೇಲೆ ಡಿಂಪಲ್‌ ಇದ್ದರೆ ಅದೃಷ್ಟವೇ? ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತೆ?

Share this… Facebook Whatsapp Telegram Pinterest Twitter Linkedin Cheek Dimples: ಕೆನ್ನೆಯ ಮೇಲೆ ಡಿಂಪಲ್‌ ಇದ್ದರೆ ವ್ಯಕ್ತಿಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಡಿಂಪಲ್‌ ಇರುವವರು ಅದೃಷ್ಟವಂತರೇ ಎಂಬ ಪ್ರಶ್ನೆ ಹಲವರಲ್ಲಿದೆ. ಸಾಮುದ್ರಿಕ ಶಾಸ್ತ್ರದಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳಿವೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆನ್ನೆಯ ಮೇಲೆ ಡಿಂಪಲ್‌ ಇರುವವರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಮಾತು, ನಗು ಮತ್ತು ನಡವಳಿಕೆಯಿಂದ ಇತರರನ್ನು ಸುಲಭವಾಗಿ ಸೆಳೆಯುತ್ತಾರೆ ಎಂಬ ನಂಬಿಕೆಯಿದೆ. ಇಂತಹ…

Read More

Viral Video: ರೀಲ್ಸ್‌ಗಾಗಿ 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದು ಎರಡೂ ಕಾಲುಗಳ ಮೂಳೆ ಮುರಿದುಕೊಂಡ ಭೂಪ

Share this… Facebook Whatsapp Telegram Pinterest Twitter LinkedinViral Video: ರೀಲ್ಸ್‌ಗಾಗಿ ಅಪಾಯಕಾರಿ ಸಾಹಸ ಮಾಡಲು ಹೋಗಿ 38 ವರ್ಷದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪಹುಜ್ ಡ್ಯಾಂನಲ್ಲಿ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಪುಷ್ಪೇಂದ್ರ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಶೂಟ್ ಮಾಡಲು ಪಹುಜ್ ಡ್ಯಾಂಗೆ ತೆರಳಿದ್ದ. ವಿಭಿನ್ನ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್…

Read More

Investment Tips: ಶ್ರೀಮಂತರು ಹಣ ಡಬಲ್‌ ಮಾಡಲು ಈ 5 ಸಿಕ್ರೇಟ್‌ಗಳನ್ನೇ ಬಳಸ್ತಾರೆ!

Share this… Facebook Whatsapp Telegram Pinterest Twitter LinkedinInvestment Tips: ಹೆಚ್ಚು ಸಂಬಳ ಬಂದರೆ ಮಾತ್ರ ಶ್ರೀಮಂತರಾಗಲು ಸಾಧ್ಯವಿಲ್ಲ. ಎಷ್ಟು ಹಣ ಉಳಿಸುತ್ತೀರಿ, ಎಲ್ಲಿ ಹೂಡಿಕೆ ಮಾಡುತ್ತೀರಿ ಮತ್ತು ಖರ್ಚನ್ನು ಹೇಗೆ ನಿಯಂತ್ರಿಸುತ್ತೀರಿ ಎಂಬುದೇ ಸಂಪತ್ತು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶ್ರೀಮಂತರು ಅನುಸರಿಸುವ ಕೆಲವು ಹಣಕಾಸಿನ ಅಭ್ಯಾಸಗಳು ಸಾಮಾನ್ಯರಿಗಿಂತ ಭಿನ್ನವಾಗಿರುತ್ತವೆ. 1. ಮೊದಲು ಉಳಿತಾಯ, ನಂತರ ಖರ್ಚು ಹಣ ಕೈಗೆ ಬಂದ ನಂತರ ಖರ್ಚು ಮಾಡಿ ಉಳಿದಿದ್ದನ್ನು ಉಳಿತಾಯ ಮಾಡುವ ಬದಲು, ಮೊದಲು ಉಳಿತಾಯ…

Read More

Rebel Kid: ಬಾಯ್‌ಫ್ರೆಂಡ್ ಜೊತೆ ರೆಬೆಲ್ ಕಿಡ್ ಅಪೂರ್ವ ರೊಮ್ಯಾಂಟಿಕ್ ಲುಕ್; ಪಾರ್ಟಿಯಲ್ಲಿ ಲಿಪ್‌ಲಾಕ್ ವೈರಲ್!

Share this… Facebook Whatsapp Telegram Pinterest Twitter LinkedinRebel Kid : ದಿ ಟ್ರೇಟರ್ಸ್’ ಹಾಗೂ ‘ಲಾಕಪ್: ಸಚ್ ಯಾ ಸಜಾ’ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಸೋಶಿಯಲ್ ಮೀಡಿಯಾ ಕ್ರಿಯೇಟರ್ ಅಪೂರ್ವ ಮುಖಿಜಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಾರ್ಟಿಯೊಂದರಲ್ಲಿ ಅಮೀನ್ ಜಾಜ್ ಜೊತೆ ಅವರು ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಅಪೂರ್ವ ಮತ್ತು ಅಮೀನ್ ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಅಮೀನ್, ಅಪೂರ್ವಾಗೆ ಕಿಸ್ ಮಾಡುತ್ತಾರೆ. ಬಳಿಕ…

Read More