ಸತ್ತವರ ಮೇಲೆ ಹೂವುಗಳನ್ನು ಹಾಕುವುದು ಏಕೆ?; ಇದರ ಹಿಂದಿದೆ ಧಾರ್ಮಿಕ, ಆಧ್ಯಾತ್ಮಿಕ ಮಹತ್ವ
Share this… Facebook Whatsapp Telegram Pinterest Twitter Linkedinಮನುಷ್ಯ ಮೃತಪಟ್ಟ ನಂತರ ಅವರ ಪಾರ್ಥಿವ ಶರೀರದ ಮೇಲೆ ಹೂವುಗಳನ್ನು ಅರ್ಪಿಸುವುದು ಅಥವಾ ಹೂಮಾಲೆ ಹಾಕುವುದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದು ಕೇವಲ ಒಂದು ಆಚರಣೆಯಲ್ಲ, ಮೃತರಿಗೆ ಸಲ್ಲಿಸುವ ಅಂತಿಮ ಗೌರವದ ಸಂಕೇತವಾಗಿದೆ. ಹೂವುಗಳ ಮೂಲಕ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇಹವನ್ನು ದೇವಾಲಯಕ್ಕೆ ಹೋಲಿಸಲಾಗುತ್ತದೆ. ಆತ್ಮವು ದೇಹವನ್ನು ತೊರೆದ ನಂತರವೂ, ಇಷ್ಟು ದಿನ ಆತ್ಮಕ್ಕೆ…